Adamya Chetana

2023

Green Sunday #397

Adamya Green #397 ಅದಮ್ಯ ಚೇತನ, ವಾಸವಿ ಸೇವಾ ಸಮಿತಿ ಹಾಗೂ ಸಮಾನ ಮನಸ್ಕ ಗೆಳೆಯರ ಬಳಗದ ಸಹಯೋಗದೊಂದಿಗೆ ದಿ. 06-08-2023 ರಂದು 397 ನೇ ಹಸಿರು ಭಾನುವಾರ ಕಾರ್ಯಕ್ರಮವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೋಲಾರದ ಅಂತರಗಂಗೆ ಪುಣ್ಯಕ್ಷೇತ್ರದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 60 ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ವಾಸವಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಲಯನ್ ಶಿವ […]

Green Sunday #397 Read More »

Green Sunday #396

Adamya Green #396 ಅದಮ್ಯ ಚೇತನದ 396 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 30-07-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್‌, ಬಯೋ ಪಾರ್ಕ್‌ನಲ್ಲಿ ನಡೆಯಿತು. 10 ಗಿಡಗಳನ್ನು ನೆಡುವುದರ ಜೊತೆಗೆ, ಆವರಣದ ಸ್ವಚ್ಛತಾ ಕಾರ್ಯ ಸಹ ಮಾಡಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಭಾಗವಹಿಸಿದ್ದರು.

Green Sunday #396 Read More »

Green Sunday #394

Adamya Green #394 ಅದಮ್ಯ ಚೇತನದ 394 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 16-07-2023 ರಂದು ಸುಬ್ರಹ್ಮಣ್ಯಪುರ ಕೆರೆಯ ಬದಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 75 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅಮೇರಿಕಾದ ಮೆಲ್ಟನ್‌ ಫೌಂಡೇನ್‌ನಿನ ಡಾ. ಸ್ಟೀಫನ್ ಬೆತ್ಮೆನ್‌ , ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.‌The 394th #GreenSunday of #AdamyaChetana

Green Sunday #394 Read More »

Green Sunday #393

Adamya Green #393 ಅದಮ್ಯ ಚೇತನ ಹಾಗೂ ಪ್ರಮೋಥೇಸ್ ಗ್ರೂಪ್‌ ( ಯುತಿಯೋಪಿಯ ಗ್ರುಪ್) ಸಂಸ್ಥೆಯ ಸಹಯೋದೊಂದಿಗೆ ದಿನಾಂಕ 09-07-2023 ರಂದು 393 ನೇ ಹಸಿರು ಭಾನುವಾರ ಕಾರ್ಯಕ್ರಮವು ಎಲೆಕ್ಟ್ರಾನಿಕ್‌ ಸಿಟಿಯ ನ್ಯೂಟೌನ್ ನಲ್ಲಿರುವ ಮಾರಗೊಂಡನಹಳ್ಳಿ ಕೆರೆ ಬದಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 200 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಯುತಿಯೋಪಿಯ ಗ್ರುಪ್‌ ನಿರ್ದೇಶಕ ಶ್ರೀ ಜಯನಂದನ್‌ , ಶ್ರೀ ಸುಜಿತ್ ಕುಮಾರ್‌, ವಿವಿಧ ಕಾಲೇಜಿನ

Green Sunday #393 Read More »

Green Sunday #392

Green Sunday #354 Adamya Green #392 ಅದಮ್ಯ ಚೇತನದ 392 ನೇ ಹಸಿರು ಭಾನುವಾರ ಕಾರ್ಯಕ್ರಮವು ನಿನ್ನೆ ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ ಎಫ್ ಲೇಔಟ್ ಆವರಣದಲ್ಲಿ 10 ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಭಾಗವಹಿಸಿದ್ದರು.

Green Sunday #392 Read More »

Green Sunday #391

Green Sunday #354 Adamya Green #391 ಅದಮ್ಯ ಚೇತನ ಹಾಗೂ ಬನಶಂಕರಿಯ ಪರಿಸರ ಸಂರಕ್ಷಣಾ (ಪರ್ಯಾವರಣ) ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 25/ 06/2023 ರಂದು 391 ನೇ ಹಸಿರು ಭಾನುವಾರ ಕಾರ್ಯಕ್ರಮವು, ಸುಬ್ರಹ್ಮಣ್ಯಪುರ ಕೆರೆಯ ಬದಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 250 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ, ನಿಕಟಪೂರ್ವ ಕಾರ್ಪೋರೇಟರ್

Green Sunday #391 Read More »

Green Sunday #390

Green Sunday #354 Adamya Green #390 ಜೂನ್‌ 18ರಂದು ನಡೆದ 390ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ವಿಶ್ವವಿದ್ಯಾಲಯದ ಎನ್‌ಜಿಇಎಫ್‌ ಬಯೋ ಪಾರ್ಕ್‌ನಲ್ಲಿ ನಡೆಯಿತು. 10 ಹೊಂಗೆ, 10 ಕಾಡು ಬಾದಾಮಿ ಗಿಡಗಳನ್ನು ನೆಡುವುದರ ಜೊತೆಗೆ, ಆವರಣದ ಸ್ವಚ್ಛತಾ ಕಾರ್ಯ ಸಹ ಮಾಡಲಾಯಿತು. ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜು ಹಾಗೂ ಕುಮಾರನ್‌ ಸ್ಕೂಲ್‌ ವಿದ್ಯಾರ್ಥಿಗಳು, ಯೂಥ್‌ ಫಾರ್‌ ಸೇವಾ ಹಾಗೂ ಹಸಿರು ಸ್ವಯಂ ಸೇವಕರು ಸೇರಿ 80 ಜನ ಈ ಒಂದು ಗ್ರೀನ್‌ ಸಂಡೆಯಲ್ಲಿ ಭಾಗವಹಿಸಿದ್ದರು.

Green Sunday #390 Read More »

Green Sunday #389

Green Sunday #354 Adamya Green #389 ಅದಮ್ಯ ಚೇತನದ 389 ನೇ ಹಸಿರು ಭಾನುವಾರ ಕಾರ್ಯಕ್ರಮವು ನಿನ್ನೆ ಎಸ್. ಎಮ್ ಎಸ್ ಲೇಔಟ್,‌ ಜೆಪಿ‌ನಗರ ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸ್ವಯಂ‌ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.

Green Sunday #389 Read More »

Green Sunday #388

Green Sunday #354 Adamya Green #388 ಅದಮ್ಯ ಚೇತನದ 388ನೇ ಹಸಿರು ಭಾನುವಾರ ಕಾರ್ಯಕ್ರಮ ಜೂನ್‌ 4ರಂದು ಬೆಂಗಳೂರು ವಿವಿಯ ಎನ್‌ಎಸ್‌ಎಸ್‌ ಭವನದ ಹಿಂಭಾಗದ ಬಿಯು ಬಯೋ-ಪಾರ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು. 25 ನೇರಳೆ, 25 ಬೆಟ್ಟದ ನೆಲ್ಲಿಕಾಯಿ, 20 ಬಾದಾಮಿ, 10 ಹಲಸು ಹಾಗೂ 10 ಪನ್ನೇರಳೆ ಗಿಡಗಳನ್ನು ನೆಡಲಾಯಿತು.ಈ ಹಸಿರು ಕಾರ್ಯಕ್ಕೆ ಗ್ಲೋಬಲ್‌ ಕಾಲೇಜು, ಬಿಎಂಎಸ್‌ ಕಾಲೇಜು, ನೃಪತುಂಗ ಯೂನಿರ್ವಸಿಟಿ, ಕಳಿಂಗ ಇಂಡಸ್‌ ಟೆಕ್‌, ಯೂಥ್ ಫಾರ್ ಸೇವಾ, ಯುವಿಸಿಇ ಮತ್ತು ಅದಮ್ಯ ಚೇತನ

Green Sunday #388 Read More »