Adamya Chetana

Green Sunday

Green Sunday #555

Adamya Green #555   ನಮ್ಮ ಭಾನುವಾರ… ಹಸಿರಿಗಾಗಿ! ಅದಮ್ಯ ಚೇತನದ 555ನೇ ಹಸಿರು ಭಾನುವಾರವು ಕೋರಮಂಗಲದ 5ನೇ ಬ್ಲಾಕ್ ಪಾರ್ಕ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು! ಈ ಬಾರಿಯ ವಿಶೇಷವೆಂದರೆ, The Times of India (#IamBengaluru – Volunteer for Parks) ಮತ್ತು ಕ್ರಿಸ್ತು ಜಯಂತಿ ಕಾಲೇಜು (Kristu Jayanti College) ಸಹಯೋಗದೊಂದಿಗೆ ಹಲವು ಪರಿಸರ ಪ್ರೇಮಿಗಳು, ಸ್ವಯಂಸೇವಕರು ಹಾಗೂ ಸ್ಥಳೀಯರು ಹಾಗೂ ಪುಟ್ಟ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಗಿಡ ನೆಡುವುದು, ಉದ್ಯಾನವನದ ಹಸಿರನ್ನು ಸಂರಕ್ಷಿಸುವುದು […]

Green Sunday #555 Read More »

Green Sunday #554

Adamya Green #554 ಭೂಮಿಯಿಂದ ನಾವು ಎಲ್ಲವನ್ನೂ ಪಡೆದಿದ್ದೇವೆ, ಆದರೆ ತಿರುಗಿ ಕೊಡುತ್ತಿರುವುದಾದರೂ ಏನು? ಬೆಂಗಳೂರಿನ ಬಿಡಿಎ 6ನೇ ಹಂತ, 10ನೇ ಬ್ಲಾಕ್‌ ನ ಕನಕಭವನದ ಹಿಂಭಾಗದಲ್ಲಿರುವ ಬಿಡಿಎ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅದಮ್ಯ ಚೇತನದ 554ನೇ ಹಸಿರು ಭಾನುವಾರ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಸಮಯ ಮೀಸಲಿಟ್ಟು ಬಂದವರು, ಕೈಯಾರೆ ಮಣ್ಣು ಮುಟ್ಟಿ ಸಸಿ ನೆಟ್ಟವರು, ಪ್ರೀತಿಯಿಂದ ನೀರುಣಿಸಿದವರು… ನಿಮ್ಮ ಈ ಪುಟ್ಟ ಪ್ರಯತ್ನ ನಾಳೆ ಯಾರಿಗೋ ಶುದ್ಧ ಗಾಳಿಯಾಗಬಹುದು, ಯಾವುದೋ

Green Sunday #554 Read More »

Green Sunday #553

Adamya Green #553 553 ವಾರಗಳ ಹಸಿರು ಸಂಕಲ್ಪ… ಇನ್ನೂ ನಿಲ್ಲದ ಪಯಣ! ನಿರಂತರ ಸೇವೆ, ದಣಿವರಿಯದ ಉತ್ಸಾಹ ಮತ್ತು ಪರಿಸರದ ಮೇಲಿನ ಅಪಾರ ಪ್ರೀತಿಯೊಂದಿಗೆ ಅದಮ್ಯ ಚೇತನದ 553ನೇ ‘ಹಸಿರು ಭಾನುವಾರ’ದ ಅಂಗವಾಗಿ ಆರ್.ಆರ್. ನಗರದ ಚೆನ್ನಸಂದ್ರದಲ್ಲಿ ಸಾಲು ಸಾಲು ಗಿಡಗಳನ್ನು ನೆಟ್ಟು, ಹಸಿರಿನ ಹೊಸ ಭರವಸೆಯನ್ನು ಬಿತ್ತಲಾಯಿತು. ಪೂಜ್ಯ ಶ್ರೀ ಅನಂತಕುಮಾರ್ ಅವರ “ಹಸಿರು ಬೆಂಗಳೂರು, ಹಸಿರು ಭಾರತ್” ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಹಸಿರು ಯೋಧರು, ಸ್ವಯಂಸೇವಕರು

Green Sunday #553 Read More »

Green Sunday #552

Adamya Green #552 25,000 ಗಿಡಗಳು… ಬೆಂಗಳೂರಿನ ಭವಿಷ್ಯದ ಉಸಿರು! ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನಾವು ನೆಟ್ಟ 25,000 ಗಿಡಗಳು ಕೇವಲ ಸಂಖ್ಯೆಗಳಲ್ಲ; ಅವು ಬೆಂಗಳೂರಿನ ಹಸಿರು ಭವಿಷ್ಯಕ್ಕೆ ನಾವು ನೀಡುತ್ತಿರುವ ಜೀವನಾಡಿ. ನಿನ್ನೆ ನಡೆದ 552ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ, ಈ ಗಿಡಗಳ ಸಂರಕ್ಷಣೆ, ನಿರ್ವಹಣೆ ಹಾಗೂ ನೀರೆರೆಯುವ ಕಾರ್ಯವನ್ನು ಆರ್.ಆರ್. ನಗರದ ಹಸಿರು ಸೆಲೆ ತಂಡ ಮತ್ತು ಸಮರ್ಪಿತ ಸ್ವಯಂಸೇವಕರು ಅತ್ಯಂತ

Green Sunday #552 Read More »

Green Sunday #551

Adamya Green #551 25,000 ಜೀವಗಳಿಗೆ ಜೀವ ನೀಡಿದ ನೆಲದಲ್ಲಿ… ಈಗ ವಾತ್ಸಲ್ಯದ ಹಸಿರು ಪೋಷಣೆ: ನೆಟ್ಟ ಸಸಿಯನ್ನು ಹೆತ್ತ ಮಗುವಿನಂತೆ ಪ್ರೀತಿಯಿಂದ ಸಾಕಿ ಪೋಷಿಸಿದಾಗ ಮಾತ್ರ ಅದು ಹೆಮ್ಮರವಾಗಲು ಸಾಧ್ಯ… ನಿನ್ನೆ ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನೆರವೇರಿದ ಅದಮ್ಯ ಚೇತನದ 551ನೇ ಹಸಿರು ಭಾನುವಾರ ಬರಿ ಗಿಡ ನೆಡುವ ಕಾರ್ಯಕ್ರಮವಾಗಿರಲಿಲ್ಲ; ಅದು ನಾವು ನೆಟ್ಟ 25,000 ಹಸಿರು ಜೀವಗಳಿಗೆ ನೀರೆರೆದು, ಮಮತೆಯಿಂದ ಪೋಷಿಸುವ ಪವಿತ್ರ ಸಂಕಲ್ಪದ ದಿನವಾಗಿತ್ತು! ಗಿಡಗಳಿಗೆ ಜೀವಜಲ ನೀಡಿದ ವಿವೇಕಾನಂದ ಹೈಸ್ಕೂಲ್

Green Sunday #551 Read More »

Green Sunday #550

Adamya Green #550 550+ ವಾರಗಳ ಅವಿರತ ಹಸಿರು ಪಯಣ! ಬಿಸಿಲಿರಲಿ, ಮಳೆಯಿರಲಿ… ಕಳೆದ 550ಕ್ಕೂ ಹೆಚ್ಚು ಭಾನುವಾರಗಳಿಂದ ಆ ಕೈಗಳು ವಿಶ್ರಮಿಸಿಲ್ಲ! ಹಾರೆ-ಪಿಕ್ಕಾಸು ಹಿಡಿದು ಹೊರಡುವ ಅದಮ್ಯ ಚೇತನದ ಸಂಕಲ್ಪಕ್ಕೆ ಋತುಗಳ ಬದಲಾವಣೆಯೂ ಅಡ್ಡಿಯಾಗಲಿಲ್ಲ. ನಮ್ಮ ಹೆಮ್ಮೆಯ “ಹಸಿರು ಭಾನುವಾರ” ಅಭಿಯಾನವು ಕಳೆದ ವಾರ ಬನಶಂಕರಿ 6ನೇ ಹಂತದ ಕೊಡಿಪಾಳ್ಯದಲ್ಲಿ ಹೊಸ ಇತಿಹಾಸ ಬರೆಯಿತು. ಒಂದೇ ದಿನದಲ್ಲಿ ನೆಟ್ಟ ಬರೋಬ್ಬರಿ 25,000 ಸಸಿಗಳಿಗೆ ಶಾಲಾ ಮಕ್ಕಳು ಮತ್ತು ಸ್ವಯಂಸೇವಕರು ಅಕ್ಕರೆಯಿಂದ ನೀರುಣಿಸಿದರು. ಮಕ್ಕಳ ಮುಖದ ಮಂದಹಾಸ,

Green Sunday #550 Read More »

Green Sunday #549

Adamya Green #549 “ಬದಲಾವಣೆ ಮಾತಿನಲ್ಲಿ ಅಲ್ಲ… ನಮ್ಮ ನಡೆ-ನುಡಿಯಲ್ಲಿ!” ನಿನ್ನೆ ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ನಡೆದ ಅದಮ್ಯ ಚೇತನದ 549ನೇ ಹಸಿರು ಭಾನುವಾರ ಮತ್ತೊಮ್ಮೆ ಪರಿಸರ ಪ್ರೇಮಿಗಳ ಒಗ್ಗಟ್ಟಿನ ಶಕ್ತಿಯನ್ನು ಸಾಬೀತುಪಡಿಸಿತು. ಅದಮ್ಯ ಚೇತನದ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಸಮ್ಮುಖದಲ್ಲಿ ಹಾಗೂ ಮಾರ್ಗದರ್ಶನದಲ್ಲಿ, ‘ಗಾರ್ಡನ್ ಸಿಟಿ’ ಬೆಂಗಳೂರಿನ ಹಸಿರು ವೈಭವವನ್ನು ಮತ್ತೆ ಅರಳಿಸುವ ಸಂಕಲ್ಪದೊಂದಿಗೆ ನಾವು ಇಟ್ಟ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಪೀಳಿಗೆಗೆ ಹಸಿರು ಉಡುಗೊರೆಯಾಗಿದೆ. ಬಿಸಿಲಿರಲಿ, ಮಳೆಯಿರಲಿ… ಕಳೆದ 549

Green Sunday #549 Read More »

Green Sunday #548

Adamya Green #548 ನಿರಂತರ ಹಸಿರು ಪಯಣ: ಅದಮ್ಯ ಚೇತನದ 548ನೇ ಹಸಿರು ಭಾನುವಾರ! ಹಸಿರು ಪರಿಸರ ನಿರ್ಮಾಣದ ನಮ್ಮ ಸಂಕಲ್ಪಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ! ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ, ಅದಮ್ಯ ಚೇತನದ 548ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಈ ಹಸಿರು ಕಾರ್ಯಕ್ರಮವು ಕೇವಲ ಗಿಡ ನೆಡುವ ಕಾರ್ಯವಲ್ಲ; ಇದು ನಮ್ಮ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ಉಡುಗೊರೆಯಾಗಿ ನೀಡುವ ದೃಢ

Green Sunday #548 Read More »

Green Sunday #547

Adamya Green #547 547 ವಾರಗಳ ನಿರಂತರ ಹಸಿರು ಪಯಣ… ಇದು ಕೇವಲ ಒಂದು ಸಂಖ್ಯೆ ಅಲ್ಲ, ಪ್ರಕೃತಿಯೊಂದಿಗೆ ನಮ್ಮ ಅವಿನಾಭಾವ ಬಾಂಧವ್ಯದ ಕಥೆ ಒಂದು ಭಾನುವಾರವೂ ತಪ್ಪದೇ, ಹಸಿರಿನ ಸೇವೆಗೆ ಸಮರ್ಪಿತವಾದ ನಮ್ಮ ‘ಹಸಿರು ಭಾನುವಾರ’ ಅಭಿಯಾನ ಮತ್ತೊಂದು ಅರ್ಥಪೂರ್ಣ ಹೆಜ್ಜೆ ಇಟ್ಟಿದೆ. ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ, ಅದಮ್ಯ ಚೇತನದ 547ನೇ ಹಸಿರು ಭಾನುವಾರ ಕಾರ್ಯಕ್ರಮವು ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ನೆಟ್ಟ ಪ್ರತಿಯೊಂದು ಸಸಿಯೂ ಭವಿಷ್ಯದ

Green Sunday #547 Read More »

Green Sunday #546

Adamya Green #546 Weekend vibes ಅಂದ್ರೆ ಬರೀ ಸುತ್ತಾಡೋದಷ್ಟೇ ಅಲ್ಲ, ಪ್ರಕೃತಿಯನ್ನು ಸೃಜಿಸೋದು ಕೂಡ! ಕಳೆದ 546 ವಾರಗಳಿಂದ ಒಂದೇ ಒಂದು ಭಾನುವಾರವೂ ಬಿಡದೆ ಸಾಗುತ್ತಿರುವ ಅದಮ್ಯ ಚೇತನದ ಹಸಿರು ಪಯಣ, ಈ ಬಾರಿ ಬನಶಂಕರಿ 6ನೇ ಸ್ಟೇಜ್‌ನ ಕೊಡಿಪಾಳ್ಯದಲ್ಲಿ ಪರಿಸರದ ಹಬ್ಬಕ್ಕೆ ಸಾಕ್ಷಿಯಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ಮಾರ್ಗದರ್ಶನದಲ್ಲಿ, ನಮ್ಮ ಹೆಮ್ಮೆಯ ಸ್ವಯಂಸೇವಕರು ಶ್ರಮದಾನದ ಮೂಲಕ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಿ, ಹೊಸ ಸಸಿಗಳನ್ನು ನೆಡಲು ಮಣ್ಣನ್ನು ಹಸನುಗೊಳಿಸಿದರು. ಪ್ರಕೃತಿಯನ್ನು ಪ್ರೀತಿಸುವ,

Green Sunday #546 Read More »