Adamya Green #538
ಹಸಿರು ಕನಸಿನ ಸಾಕಾರಕ್ಕೆ ಅದಮ್ಯ ಚೇತನದ ಪ್ರಯತ್ನಗಳು ನಿರಂತರವಾಗಿ ಮುಂದುವರಿದಿವೆ.
ಇತ್ತೀಚೆಗಷ್ಟೇ ಗವಿಪುರಂನ ಹಸಿರು ಅಡುಗೆ ಮನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕುಂಡಗಳಲ್ಲಿ ವೈಜ್ಞಾನಿಕವಾಗಿ ಸಸಿ ನೆಡುವ ಹಾಗೂ ಸಾವಯವ ಗೊಬ್ಬರ ತಯಾರಿಕೆಯ ಪ್ರಾಯೋಗಿಕ ತರಬೇತಿಯನ್ನು ನೀಡಲಾಗಿತ್ತು.
ಆ ಕಲಿಕೆಯ ಸ್ಫೂರ್ತಿಯೊಂದಿಗೆ, ಈಗ 538 ನೇ ಹಸಿರು ಭಾನುವಾರವು ಬೆಂಗಳೂರಿನ ಕನಕಪುರ ರಸ್ತೆಯ ವಾಜರಹಳ್ಳಿ ಸಮೀಪದ BCCHS ಲೇಔಟ್ ನಲ್ಲಿ ಯಶಸ್ವಿಯಾಗಿ ನೆರೆವೇರಿತು.
ಅದಮ್ಯ ಚೇತನದ ಕಾರ್ಯವೈಖರಿಯು ಹಸಿರು ಅಡುಗೆ ಮನೆಯ ಶೂನ್ಯ ತ್ಯಾಜ್ಯ ನೀತಿಯಿಂದ ಹಿಡಿದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ‘ಟೆರೇಸ್ ಗಾರ್ಡನ್’ ಬೆಳೆಸುವವರೆಗೂ ವಿಸ್ತರಿಸಿದೆ.
ಮಣ್ಣು, ಕೋಕೋಪಿಟ್ ಹಾಗೂ ಸಂಸ್ಥೆಯಲ್ಲೇ ಸಿದ್ಧಪಡಿಸಿದ ಸಾವಯವ ಗೊಬ್ಬರವನ್ನು ಬಳಸಿ ವೈಜ್ಞಾನಿಕವಾಗಿ ಗಿಡ ಬೆಳೆಸುವ ಮೂಲಕ ಸಮಾಜದಲ್ಲಿ ಹೊಸ ಹಸಿರು ಕ್ರಾಂತಿಯನ್ನು ಮೂಡಿಸಲಾಗುತ್ತಿದೆ.
ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ ಎಂಬ ಅರಿವಿನೊಂದಿಗೆ, ನಮ್ಮ ಈ ಪರಿಸರ ಸ್ನೇಹಿ ಪಯಣವು ಯುವಶಕ್ತಿಯ ಬೆಂಬಲದೊಂದಿಗೆ ನಿರಂತರವಾಗಿ ಸಾಗಲಿದೆ.



